ಕಾಂಗ್ರೆಸ್​​ನವರು ಸತ್ಯ ಮಾತನಾಡಿದರೆ ಅವರಿಗೆ ಸಾವು ಬರುತ್ತದೆ: ಸಚಿವ ಕಾರಜೋಳ

author img

By

Published : Jul 19, 2022, 7:25 AM IST

District incharge minister Govind Karjol

ಕಾಂಗ್ರೆಸ್​​ನವರು ಸತ್ಯ ಹೇಳಿದರೆ ಅವರಿಗೆ ಸಾವು ಬರುತ್ತದೆ. ಹಾಗಾಗಿ ಯಾವಾಗಲೂ ಸುಳ್ಳು ಹೇಳುತ್ತಾರೆ ಎಂದು ಸಚಿವ ಗೋವಿಂದ ಕಾರಜೋಳ ಟೀಕಿಸಿದರು.

ಚಿಕ್ಕೋಡಿ(ಬೆಳಗಾವಿ): ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಅವರು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. ಪ್ರಧಾನಿ ಮೋದಿ ಸುಳ್ಳು ಹೇಳ್ತಾರೆ ಎಂಬ ಕಾಂಗ್ರೆಸ್ ನಾಯಕರ ಆರೋಪಕ್ಕೆ ಪ್ರತಿಕ್ರಿಯಿಸಿ, ಕಾಂಗ್ರೆಸ್​​ನವರು ಯಾವತ್ತೂ ಸತ್ಯ ಮಾತನಾಡುವುದಿಲ್ಲ. ಸತ್ಯ ಮಾತನಾಡಿದರೆ ಅವರಿಗೆ ಸಾವು ಬರುತ್ತದೆ. ಅದಕ್ಕೆ ಸುಳ್ಳು ಮಾತನಾಡುತ್ತಾರೆ ಎಂದರು.


ಬಿಜೆಪಿಯವರು ಸುಳ್ಳು ಹೇಳಿಲ್ಲ‌. ಯಾವುದನ್ನು ಮಾಡಿದ್ದೇವೋ ಅದನ್ನು ಮಾತ್ರ ಹೇಳಿದ್ದೇವೆ. ಯಾವುದನ್ನ‌ು ಮಾಡಿಲ್ವೋ, ಅದನ್ನು ಮಾಡಿಲ್ಲ ಎಂದಿದ್ದೇವೆ. ಸಿದ್ದರಾಮಯ್ಯ 7 ಕೆಜಿ ಅಕ್ಕಿ ಕೊಟ್ಟಿದ್ದೇನೆ ಎಂದು ಭಾಷಣ ಮಾಡ್ತಾರೆ. ಆದರೆ ನಾವು‌ ಈಗಲೂ‌ ಕೇಂದ್ರ‌ ಮತ್ತು ರಾಜ್ಯ ಸರ್ಕಾರದಿಂದ ಒಟ್ಟು 10 ಕೆಜಿ ಅಕ್ಕಿ ಕೊಟ್ಟಿದ್ದೇವೆ. ಆದರೆ ನಾವು ಈ ಬಗ್ಗೆ ಜಾಹೀರಾತು ಕೊಟ್ಟಿಲ್ಲ ಎಂದು ಹೇಳಿದರು.

ಇದನ್ನೂ ಓದಿ: 7 ಐಎಎಸ್ ಅಧಿಕಾರಿಗಳ ವರ್ಗಾವಣೆ: ಮಹಾಂತೇಶ್ ಬೀಳಗಿಗೆ ಬೆಸ್ಕಾಂ ಹೊಣೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.