ಭ್ರಷ್ಟಾಚಾರದ ಬಗ್ಗೆ ಪ್ರಶ್ನಿಸಿದ್ದಕ್ಕೆ ಗ್ರಾ.ಪಂ. ಸದಸ್ಯನಿಗೆ ಪಿಡಿಒ ಕಪಾಳಮೋಕ್ಷ ಆರೋಪ

author img

By

Published : Sep 18, 2021, 9:18 AM IST

fight between pdo and gram panchayat member

ಜನರ ಕೆಲಸ ಮಾಡಿಕೊಡಲು 7 ರಿಂದ 8 ಸಾವಿರ ರೂ. ಬೇಡಿಕೆ ಇಡುತ್ತಿರುವ ಆರೋಪ ನಾಗನೂರು ಪಿಡಿಒ ಅವಿನಾಶ್ ಅಂಗರಗಟ್ಟಿ ವಿರುದ್ಧ ಕೇಳಿ ಬಂದಿತ್ತು. ಇದನ್ನು ಪ್ರಶ್ನಿಸಿದ ಗ್ರಾ.ಪಂ. ಸದಸ್ಯ ಬಸವರಾಜ್ ಉಣಕಲ್​ಗೆ ಪಿಡಿಒ ಕಪಾಳಮೋಕ್ಷ ಮಾಡಿದ್ದಾರೆಂದು ಬಸವರಾಜ್ ದೂರು ದಾಖಲಿಸಿದ್ದಾರೆ. ಇನ್ನೂ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾನೆಂದು ಗ್ರಾ.ಪಂ.ಸದಸ್ಯನ ವಿರುದ್ಧ ಪಿಡಿಒ‌ ಪ್ರತಿದೂರು ನೀಡಿದ್ದಾರೆ.

ಬೆಳಗಾವಿ: ಭ್ರಷ್ಟಾಚಾರದ ವಿಚಾರವಾಗಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹಾಗೂ ಗ್ರಾಮ ಪಂಚಾಯತ್ ಸದಸ್ಯ ಕಿತ್ತಾಡಿಕೊಂಡಿರುವ ಘಟನೆ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ನಾಗನೂರು ಗ್ರಾ.ಪಂ. ಕಚೇರಿ ಆವರಣದಲ್ಲಿ ನಡೆದಿದೆ.

ಗ್ರಾಪಂ ಸದಸ್ಯ ಬಸವರಾಜ್ ಉಣಕಲ್

ಮನೆ, ಜಾಗದ ಉತಾರ ನೀಡಲು 7 ರಿಂದ 8 ಸಾವಿರ ರೂ. ಬೇಡಿಕೆ ಇಡುತ್ತಿರುವ ಆರೋಪ ನಾಗನೂರು ಪಿಡಿಒ ಅವಿನಾಶ್ ಅಂಗರಗಟ್ಟಿ ವಿರುದ್ಧ ಕೇಳಿ ಬಂದಿತ್ತು. ಹಣಕ್ಕೆ ಬೇಡಿಕೆ ಇಡುತ್ತಿರುವುದೇಕೆ ಎಂದು ಗ್ರಾ.ಪಂ. ಸದಸ್ಯ ಬಸವರಾಜ್ ಉಣಕಲ್ ಪ್ರಶ್ನಿಸಿದ್ದಾರೆ. ಇದಕ್ಕೆ ಕುಪಿತಗೊಂಡ ಪಿಡಿಒ ಗ್ರಾ.ಪಂ. ಸದಸ್ಯನಿಗೆ ಕಪಾಳಮೋಕ್ಷ ಮಾಡಿದ್ದಾರೆಂದು ತಿಳಿದುಬಂದಿದೆ.‌

ಇದನ್ನೂ ಓದಿ: ಬಿಜೆಪಿಯವರು ಹಿಂಬಾಗಿಲ ಮೂಲಕ ದೇವಾಲಯಗಳನ್ನು ಒಡೆಯುತ್ತಿದ್ದಾರೆ: ಶಿವರಾಜ ತಂಗಡಗಿ

ಈ ಪ್ರಕರಣ ಸಂಬಂಧ ನೇಸರಗಿ ಪೊಲೀಸ್ ಠಾಣೆಯಲ್ಲಿ ದೂರು-ಪ್ರತಿ ದೂರು ದಾಖಲಾಗಿದೆ. ಪಿಡಿಒ ಅವಿನಾಶ್ ಅಂಗರಗಟ್ಟಿ ತನ್ನ ಮೇಲೆ ಹಲ್ಲೆ ಮಾಡಿರುವುದಾಗಿ ಗ್ರಾ.ಪಂ. ಸದಸ್ಯ ಬಸವರಾಜ ದೂರು ನೀಡಿದ್ರೆ, ಮತ್ತೊಂದೆಡೆ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾನೆಂದು ಗ್ರಾ.ಪಂ. ಸದಸ್ಯನ ವಿರುದ್ಧ ಪಿಡಿಒ‌ ಪ್ರತಿದೂರು ನೀಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.