ಪುಣೆ (ಮಹಾರಾಷ್ಟ್ರ) : ನಾಲ್ವರು ದುಷ್ಕರ್ಮಿಗಳು ಸೇರಿ ಕುಸ್ತಿಪಟುವೊಬ್ಬರನ್ನು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಮಹಾರಾಷ್ಟ್ರದ ಪುಣೆ ಜಿಲ್ಲೆಯ ಚಕನ್ ಪ್ರದೇಶದಲ್ಲಿ ನಿನ್ನೆ ರಾತ್ರಿ ನಡೆದಿದೆ.
ನಾಗೇಶ್ ಕರಾಲೆ (37) ಎಂಬುವರು ಕೊಲೆಯಾದ ಕುಸ್ತಿಪಟು. ತಮ್ಮ ಕಾರಿನಲ್ಲಿ ಕುಳಿತು ನಾಗೇಶ್ ಗಾಡಿ ಸ್ಟಾರ್ಟ್ ಮಾಡುತ್ತಿದ್ದ ವೇಳೆ ಮುಸುಕುದಾರಿ ವ್ಯಕ್ತಿಯೊಬ್ಬ ಬಂದು ಕಾರಿನ ಕಿಟಕಿ ಗಾಜಿಗೆ ಗುಂಡು ಹಾರಿಸಿ ಒಡೆದಿದ್ದಾನೆ. ಬಳಿಕ ಮತ್ತೆ ಮೂವರು ಬಂದಿದ್ದು, ಎಲ್ಲರೂ ಸೇರಿ ನಾಗೇಶ್ ಮೇಲೆ ಗುಂಡು ಹಾರಿಸಿದ್ದಾರೆ. ಘಟನೆಯ ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಇದನ್ನೂ ಓದಿ: ಮಚ್ಚಿನಿಂದ ಹೊಡೆದು ಬರ್ಬರವಾಗಿ ಕೊಲೆ : ಬೆಳ್ಳಂಬೆಳಗ್ಗೆ ರಾಮನಗರದಲ್ಲಿ ಹರಿದ ನೆತ್ತರು
ಘಟನೆ ಸಂಬಂಧ ಪಿಂಪ್ರಿ-ಚಿಂಚ್ವಾಡ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಚುರುಕುಗೊಳಿಸಿದ್ದಾರೆ. ಕಳೆದ ಎಂಟು ದಿನಗಳಲ್ಲಿ ಪಿಂಪ್ರಿ-ಚಿಂಚ್ವಾಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಮೂರನೇ ಕೊಲೆ ಇದಾಗಿದ್ದು, ಪೊಲೀಸ್ ಕಮಿಷನರ್ ಕೃಷ್ಣ ಪ್ರಕಾಶ್ ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ.