ಗಾಳಿಪಟಕ್ಕಾಗಿ ವಿದ್ಯುತ್​ ಕಂಬ ಏರಿದ ಬಾಲಕನಿಗೆ ಕರೆಂಟ್​ ಶಾಕ್​.. ಸ್ಥಿತಿ ಗಂಭೀರ

author img

By

Published : Jan 15, 2022, 3:26 PM IST

Updated : Jan 15, 2022, 3:46 PM IST

Electric shock to boy

Electric shock to boy: ವಿದ್ಯುತ್ ಕಂಬದಲ್ಲಿ ಸಿಲುಕಿಕೊಂಡಿದ್ದ ಗಾಳಿಪಟ ತೆಗೆಯಲು ಕಂಬ ಏರಿದ್ದ ಬಾಲಕನಿಗೆ ಕರೆಂಟ್ ಶಾಕ್ ಹೊಡೆದಿರುವ ಘಟನೆ ತೆಲಂಗಾಣದಲ್ಲಿ ಸಂಭವಿಸಿದೆ.

ಹೈದರಾಬಾದ್​​(ತೆಲಂಗಾಣ): ಸಂಕ್ರಾಂತಿ ಸಂದರ್ಭದಲ್ಲಿ ಗಾಳಿಪಟ ಹಾರಿಸುತ್ತಿದ್ದ ವೇಳೆ ಅದು ವಿದ್ಯುತ್​ ಕಂಬದಲ್ಲಿ ಸಿಲುಕಿಕೊಂಡಿದ್ದು, ಅಲ್ಲಿಂದ ಹೊರಗೆ ತೆಗೆಯಲು ಹೋದಾಗ ಬಾಲಕನೋರ್ವನಿಗೆ ವಿದ್ಯುತ್​​​ ಶಾಕ್​ ಹೊಡೆದಿದೆ. ತೆಲಂಗಾಣದ ಮುಲುಗು ಜಿಲ್ಲೆಯ ಗ್ರಾಮವೊಂದರಲ್ಲಿ ಈ ಘಟನೆ ನಡೆದಿದೆ.

ಗಾಳಿಪಟಕ್ಕಾಗಿ ವಿದ್ಯುತ್​ ಕಂಬ ಏರಿದ ಬಾಲಕನಿಗೆ ಕರೆಂಟ್​ ಶಾಕ್

12 ವರ್ಷದ ಬಾಲಕನೋರ್ವ ಗಾಳಿಪಟ ಹಾರಿಸುವಾಗ ಅದು ವಿದ್ಯುತ್​ ಕಂಬದಲ್ಲಿ ಸಿಲುಕಿಕೊಂಡಿದೆ. ಅದನ್ನು ಹೊರ ತೆಗೆಯಬೇಕೆಂಬ ಉದ್ದೇಶದಿಂದ ದಿಢೀರ್​ ಆಗಿ ವಿದ್ಯುತ್​ ಕಂಬ ಏರಿದ್ದಾನೆ. ಈ ವೇಳೆ ಆತನಿಗೆ ವಿದ್ಯುತ್​​​ ಸ್ಪರ್ಶಿಸಿದೆ.​ಇದನ್ನ ನೋಡಿರುವ ಸ್ಥಳೀಯರು ತಕ್ಷಣವೇ ವಿದ್ಯುತ್​ ಪ್ರಸರಣ ನಿಗಮಕ್ಕೆ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿರಿ: 'ಯೋಗಿ ಗೋರಖ್​ಪುರ್​​ದಲ್ಲೇ ಇರಬೇಕು' ಅಲ್ಲೇ ಇರಿ ಎಂದು ಸಿಎಂ ಆದಿತ್ಯನಾಥ್​ ಕಾಲೆಳೆದ ಅಖಿಲೇಶ್​

ತಕ್ಷಣವೇ ಲೈನ್​ಮನ್​ಗಳು ವಿದ್ಯುತ್​ ಸಂಪರ್ಕ ಕಡಿತಗೊಳಿಸಿ, ಬಾಲಕನನ್ನು ಕೆಳಗಿಳಿಸಿದ್ದಾರೆ. ಪ್ರಜ್ಞೆ ತಪ್ಪಿದ ಮಗುವನ್ನ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರೆದಿದೆ. ಬಾಲಕನ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ.

Last Updated :Jan 15, 2022, 3:46 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.