ಭೂ ಹಗರಣ ಪ್ರಕರಣ: ಸಂಜಯ್​​ ರಾವುತ್​​ಗೆ ಸಿಗದ ರಿಲೀಫ್​​; ಆಗಸ್ಟ್​​ 8ರವರೆಗೆ ED ಕಸ್ಟಡಿ ವಿಸ್ತರಣೆ

author img

By

Published : Aug 4, 2022, 3:58 PM IST

Shiv Sena MP Sanjay Raut

ಪತ್ರಾ ಚಾಲ್ ಭೂ ಹಗರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ಶಿವಸೇನೆ ಸಂಸದ ಸಂಜಯ್ ರಾವುತ್​ ಅವರ ಇಡಿ ಕಸ್ಟಡಿ ಅವಧಿ ಆಗಸ್ಟ್​​ 8ರವರೆಗೆ ವಿಸ್ತರಣೆಯಾಗಿದೆ.

ಮುಂಬೈ(ಮಹಾರಾಷ್ಟ್ರ): ಪತ್ರಾ ಚಾಲ್​ ಭೂ ಹಗರಣದಲ್ಲಿ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ಶಿವಸೇನಾ ಸಂಸದ ಸಂಜಯ್ ರಾವುತ್ ಅವರು ಸದ್ಯ ಜಾರಿ ನಿರ್ದೇಶನಾಲಯ(ಇಡಿ) ವಶದಲ್ಲಿದ್ದು ವಿಚಾರಣೆ ಮುಂದುವರೆದಿದೆ. ಇಂದು ಈ ಕುರಿತ ವಿಚಾರಣೆ ನಡೆಸಿದ ಇಲ್ಲಿನ ವಿಶೇಷ ಪಿಎಂಎಲ್‌ಎ ನ್ಯಾಯಾಲಯವು ರಾವುತ್ ಇಡಿ ಕಸ್ಟಡಿ ಅವಧಿಯನ್ನು ಆಗಸ್ಟ್ 8ರವರೆಗೆ ವಿಸ್ತರಿಸಿ ಆದೇಶಿಸಿದೆೆ.

ವಿಚಾರಣೆಯ ಸಂದರ್ಭದಲ್ಲಿ, "ಸೆಲ್​​ನಲ್ಲಿ ನಿಮಗೆ ಏನಾದ್ರೂ ಸಮಸ್ಯೆ ಇದೆಯೇ?" ಎಂದು ನ್ಯಾಯಾಧೀಶರು ಪ್ರಶ್ನಿಸಿದ್ದಾರೆ. ಆಗ ರಾವುತ್‌ "ಸರಿಯಾದ ಗಾಳಿ ಬರುತ್ತಿಲ್ಲ" ಎಂದು ಹೇಳಿದ್ದಾರೆ. ಈ ವೇಳೆ ಮಧ್ಯಪ್ರವೇಶ ಮಾಡಿರುವ ಇಡಿ ವಕೀಲರು, ಅವರನ್ನು ಇರಿಸಿರುವ ಕಚೇರಿಯಲ್ಲಿ ಎಸಿ ವ್ಯವಸ್ಥೆ ಇದೆ. ರಾವುತ್​​ ಸುಳ್ಳು ಹೇಳುತ್ತಿದ್ದಾರೆಂದು ತಿಳಿಸಿದರು.

ಪ್ರಕರಣದಲ್ಲಿ ಸಂಜಯ್ ರಾವುತ್​ ಅವರ ಖಾತೆಗೆ 1 ಕೋಟಿ 6 ಲಕ್ಷ ರೂ ಹೇಗೆ ಬಂದಿದೆ?. ವಿದೇಶಿ ಪ್ರವಾಸಕ್ಕೆ ಎಷ್ಟು ಹಣ ಖರ್ಚಾಗಿದೆ? ಎಂಬುದರ ಬಗ್ಗೆ ನಾವು ತನಿಖೆ ನಡೆಸಬೇಕಾಗಿದೆ. ಹೆಚ್ಚಿನ ವಿಚಾರಣೆಗೊಸ್ಕರ ಅವರನ್ನು ವಶಕ್ಕೆ ನೀಡುವಂತೆ ಕೋರ್ಟ್‌ನಲ್ಲಿ ಇಡಿ ಮಾಡಿದ ಮನವಿಯನ್ನು ಕೋರ್ಟ್‌ ಪುರಸ್ಕರಿಸಿತು.

ಇದನ್ನೂ ಓದಿ: 'ಪತ್ರಾ ಚಾಲ್' ಭೂ ಹಗರಣ ಪ್ರಕರಣ: ಶಿವಸೇನಾ ಸಂಸದ ಸಂಜಯ್ ರಾವುತ್ ಬಂಧನ

ಕಳೆದ ಐದು ದಿನಗಳ ಹಿಂದೆ ಸಂಜಯ್ ರಾವುತ್ ಅವರ ಮುಂಬೈ ನಿವಾಸದ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ಸಂದರ್ಭದಲ್ಲಿ ವಶಕ್ಕೆ ಪಡೆದು ನಂತರ ಬಂಧಿಸಲಾಗಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.