ಅತ್ತೆಯೊಂದಿಗೆ ಅನೈತಿಕ ಸಂಬಂಧ ಹೊಂದಿದ ಆರೋಪ: ವ್ಯಕ್ತಿ ಕೊಲೆ ಮಾಡಿದ ಅಳಿಯ

author img

By

Published : Nov 25, 2022, 4:30 PM IST

MURDER OF PERSON

ಸ್ನೇಹಿತನ ಸಹಾಯದಿಂದ ಅಳಿಯ ಅತ್ತೆಯೊಂದಿಗೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದ ವ್ಯಕ್ತಿಯನ್ನು ಕೊಲೆ ಮಾಡಿದ ಆಘಾತಕಾರಿ ಘಟನೆಯೊಂದು ಮಹಾರಾಷ್ಟ್ರದ ತುರ್ಭೆಯಲ್ಲಿ ನಡೆದಿದೆ.

ಮುಂಬೈ: ಅತ್ತೆಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ವ್ಯಕ್ತಿಯನ್ನು, ಅಳಿಯನೊಬ್ಬ ಸ್ನೇಹಿತರ ಸಹಾಯದಿಂದ ಕೊಲೆ ಮಾಡಿರುವ ಘಟನೆ ಮಹಾರಾಷ್ಟ್ರದ ತುರ್ಭೆಯಲ್ಲಿ ನಡೆದಿದೆ.

ಮಂಗಳವಾರ ಬೆಳಗ್ಗೆ 8:30 ರ ಸುಮಾರಿಗೆ ಎಪಿಎಂಸಿ ಮಾರುಕಟ್ಟೆಯಿಂದ ತುರ್ಭೆ ನಾಕಾ ಕಡೆಗೆ ಇಳಿಯುವ ಸೇತುವೆಯ ಕೆಳಗೆ 40 ರಿಂದ 45 ವರ್ಷ ವಯಸ್ಸಿನ ಬಂಗಾಳಿ ವ್ಯಕ್ತಿಯ ಶವ ಪತ್ತೆಯಾಗಿದೆ. ಮೃತರನ್ನು ಬಂಗಾಳಿ ಬಾಬಾ ಎಂದು ಕರೆಯಲಾಗುತ್ತಿತ್ತು ಎನ್ನಲಾಗ್ತಿದೆ. ಆದರೆ, ಅವರ ಗುರುತು ಇನ್ನೂ ಪತ್ತೆಯಾಗಿಲ್ಲ.

ಇದನ್ನೂ ಓದಿ: 42 ಅಯ್ಯಪ್ಪ ಭಕ್ತಾದಿಗಳನ್ನು ಕಾಪಾಡಿ ಪ್ರಾಣ ಬಿಟ್ಟ ಬಸ್​ ಚಾಲಕ!

ಮೋನು ರಾಜ್‌ಕುಮಾರ್ ದೀಕ್ಷಿತ್ (33) ಮತ್ತು ಹೇಮೇಂದ್ರ ಫೇಕು ಗುಪ್ತಾ (38) ಆರೋಪಿಗಳು. ಆರೋಪಿಗಳು ತಪ್ಪೊಪ್ಪಿಕೊಂಡಿದ್ದು, ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 302 ರ ಅಡಿ ಪ್ರಕರಣ ದಾಖಲಿಸಲಾಗಿದೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಇದೇ ತಿಂಗಳ 25ರವರೆಗೆ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ಮೃತ ಬೆಂಗಾಲಿ ಬಾಬಾ ಆರೋಪಿ ಮೋನು ದೀಕ್ಷಿತ್ ಅವರ ಅತ್ತೆಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದರು ಎನ್ನಲಾಗ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.