ತೆರೆದ ಜೀಪ್‌ ಚಲಾಯಿಸಿ ತಾನಿನ್ನೂ ಗಟ್ಟಿಯಾಗಿದ್ದೇನೆ ಎಂಬ ಸಂದೇಶ ರವಾನಿಸಿದ ಲಾಲೂ

author img

By

Published : Nov 24, 2021, 9:09 PM IST

Lalu Prasad Yadav drives open jeep on Patna streets

ಮೇವು ಹಗರಣ ಪ್ರಕರಣದಲ್ಲಿ ಜೈಲುವಾಸ ಅನುಭವಿಸಿ ಕೆಲವು ತಿಂಗಳ ಹಿಂದಷ್ಟೇ ಜೈಲಿನಿಂದ ಹೊರಬಂದಿರುವ ಆರ್‌ಜೆಡಿ ವರಿಷ್ಠ ಲಾಲೂ ಪ್ರಸಾದ್‌ ಯಾದವ್‌ ಇಂದು ತೆರೆದ ಜೀಪ್‌ ಚಲಾಯಿಸಿದ್ದಾರೆ. ಈ ವಿಡಿಯೋವನ್ನು ತಮ್ಮ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ.

ಪಾಟ್ನಾ(ಬಿಹಾರ): ಆರ್‌ಜೆಡಿ ಅಧ್ಯಕ್ಷ ಲಾಲೂ ಪ್ರಸಾದ್ ಯಾದವ್‌ ತೆರೆದ ಜೀಪ್‌ ಚಲಾಯಿಸುವ ಮೂಲಕ ತಾನು ಇನ್ನೂ ಗಟ್ಟಿಯಾಗಿದ್ದೇನೆ ಎಂಬ ಸಂದೇಶ ರವಾನಿಸಿದರು.

ತಮ್ಮ ಪತ್ನಿ ಹಾಗೂ ಮಾಜಿ ಸಿಎಂ ರಾಬ್ಡಿ ದೇವಿ ಅವರಿಗೆ ಮಂಜೂರಾಗಿದ್ದ ಬಂಗಲೆಯ ಆವರಣದಿಂದ ಹೊರಟ ಲಾಲೂ, ತಮ್ಮ ಅನಾರೋಗ್ಯದ ಹೊರತಾಗಿಯೂ ಪಾಟ್ನಾದ ಕೆಲ ಬೀದಿಗಳಲ್ಲಿ ಜೀಪ್‌ ಚಲಾಯಿಸಿದ್ದಾರೆ. ಈ ವಿಡಿಯೋವನ್ನು ಅವರೇ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಕಳೆದ ಸೋಮವಾರದಿಂದ ಲಾಲೂ ಪ್ರಸಾದ್‌ ಯಾದವ್‌ ಪಾಟ್ನಾದಲ್ಲಿ ಇದ್ದಾರೆ.

  • आज वर्षों बाद अपनी प्रथम गाड़ी को चलाया।

    इस संसार में जन्मे सभी लोग किसी ना किसी रूप में ड्राइवर ही तो है।

    आपके जीवन में प्रेम, सद्भाव, सौहार्द, समता, समृद्धि, शांति, सब्र, न्याय और खुशहाली रूपी गाड़ी सबको साथ लेकर सदा मजे से चलती रहे। pic.twitter.com/G6x3JrCNlO

    — Lalu Prasad Yadav (@laluprasadrjd) November 24, 2021 " class="align-text-top noRightClick twitterSection" data=" ">

ವರ್ಷಗಳ ನಂತರ ಇಂದು ಮೊದಲ ಬಾರಿಗೆ ವಾಹನವನ್ನು ಚಲಾಯಿಸಿದ್ದೇನೆ. ಈ ಜಗತ್ತಿನಲ್ಲಿ ಹುಟ್ಟಿದವರೆಲ್ಲರೂ ಯಾವುದಾದರೊಂದು ರೂಪದಲ್ಲಿ ಚಾಲಕರೇ ಆಗಿರುತ್ತಾರೆ. ಪ್ರೀತಿ, ಸೌಹಾರ್ದತೆ, ಸಮಾನತೆ, ಸಮೃದ್ಧಿ, ಸಹನೆ ಮತ್ತು ನ್ಯಾಯದ ವಾಹನವು ನಿಮ್ಮ ಜೀವನದಲ್ಲಿ ಸುಗಮವಾಗಿ ಸಾಗಲಿ ಎಂದು ಹಿಂದಿಯಲ್ಲಿ ಟ್ವೀಟಿಸಿದ್ದಾರೆ.

ಮೇವು ಹಗರಣ ಪ್ರಕರಣದಲ್ಲಿ ಜೈಲುವಾಸ ಅನುಭವಿಸಿ ಕೆಲವು ತಿಂಗಳ ಹಿಂದಷ್ಟೇ ಜೈಲಿನಿಂದ ಹೊರಬಂದ ನಂತರ ದೆಹಲಿಯಲ್ಲಿ ತಂಗಿರುವ ಆರ್‌ಜೆಡಿ ವರಿಷ್ಠನಾಯಕ, ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆ ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಹಾಜರಾಗಿದ್ದರು.

ಕಳೆದ ವಾರ ಖುದ್ದು ಹಾಜರಾಗುವಂತೆ ಆದೇಶ ನೀಡಿದ್ದ ಸಿಬಿಐ ವಿಶೇಷ ನ್ಯಾಯಾಧೀಶ ಪ್ರಜೇಶ್ ಕುಮಾರ್, ಮುಂದಿನ ವಿಚಾರಣೆಯನ್ನು ನವೆಂಬರ್ 30ಕ್ಕೆ ನಿಗದಿಪಡಿಸಿದ್ದಾರೆ. ಮುಂದಿನ ವಿಚಾರಣೆಯಲ್ಲಿ ಕೋರ್ಟ್‌ ಸುಮಾರು 200 ಸಾಕ್ಷಿಗಳನ್ನು ಪರಿಶೀಲನೆ ನಡೆಸಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.