News Today: ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ

author img

By

Published : Oct 19, 2021, 6:56 AM IST

News todNews Today: ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟay

ಇಂದಿನ ಪ್ರಮುಖ ಬೆಳವಣಿಗೆಗಳ ಕುರಿತಾದ ಮಾಹಿತಿ ಇಲ್ಲಿದೆ..

  • ಮೈಸೂರಿನ ಚಾಮುಂಡಿಬೆಟ್ಟದ ಮೇಲೆ ಇಂದು ಚಾಮುಂಡೇಶ್ವರಿ ರಥೋತ್ಸವ, ಭಕ್ತರ ಪ್ರವೇಶಕ್ಕೆ ನಿರ್ಬಂಧ
  • ಸಿಂದಗಿಗೆ ಆಗಮಿಸಿ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಳ್ಳಲಿರುವ ಸಿಎಂ ಬಸವರಾಜ ಬೊಮ್ಮಾಯಿ
  • ಕಲಬುರಗಿಯಲ್ಲಿ ಲಸಿಕಾ ಜಾಥಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿರುವ ಸಚಿವ ಆರ್.ಅಶೋಕ್​
  • ಪೊಲೀಸರು ಕೇಸರಿ ಉಡುಪು ಧರಿಸಿದ್ದನ್ನು ವಿರೋಧಿಸಿ ಬೆಂಗಳೂರಿನಲ್ಲಿ ವಾಟಾಳ್ ಪ್ರತಿಭಟನೆ
  • ವಿಧಾನಸೌಧದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ.ಸುನಿಲ್ ಕುಮಾರ್ ಸುದ್ದಿಗೋಷ್ಠಿ
  • ಕನ್ನಡ ಭವನದಲ್ಲಿ ನಿವೃತ್ತ ಐಎಎಸ್ ಅಧಿಕಾರಿ ಚಿರಂಜೀವಿ ಸಿಂಗ್ ಅವರ 'ಯಾವ ಜನ್ಮದ ಮೈತ್ರಿ' ಕೃತಿ ಕುರಿತು ಸಂವಾದ
  • ಬೆಂಗಳೂರಿನ ಜೆ.ಪಿ.ಭವನದಲ್ಲಿ ಮಾಜಿ ಎಂಎಲ್​​ಸಿ ಶರವಣ ಸುದ್ದಿಗೋಷ್ಠಿ
  • ಕೋವಿಡ್​ನಿಂದ ಸ್ಥಗಿತಗೊಂಡಿದ್ದ ರಾಷ್ಟ್ರಮಟ್ಟದ ಈಜು ಸ್ಪರ್ಧೆಗಳು ಬೆಂಗಳೂರಿನಲ್ಲಿ ಆರಂಭ
  • ರಾಜ್ಯದ ಜೈಲುಗಳ ಸುಧಾರಣೆಗೆ ಸಂಬಂಧಿಸಿದಂತೆ ಹೈಕೋರ್ಟ್​ ದಾಖಲಿಸಿಕೊಂಡಿರುವ ಸುಮೊಟೊ ವಿಚಾರಣೆ
  • ಮಡಿಕೇರಿ ನಗರದಲ್ಲಿ ಅವೈಜ್ಞಾನಿಕವಾಗಿ ತ್ಯಾಜ್ಯ ವಿಲೇವಾರಿ ಪ್ರಶ್ನಿಸಿ ಸಲ್ಲಿಸಿರುವ ಪಿಐಎಲ್ ವಿಚಾರಣೆ
  • ಹೆಚ್ಚು ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೇರಳದ ಇಡುಕ್ಕಿ ಡ್ಯಾಮ್​ನ ನೀರು ಬಿಡುಗಡೆ, ಹಲವೆಡೆ ಹೈ ಅಲರ್ಟ್​​
  • ಓಂ ಬಿರ್ಲಾ ಅವರನ್ನು ಭೇಟಿಯಾಗಿ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಲಿರುವ ಬಬುಲ್ ಸುಪ್ರಿಯೋ
  • ಟಿ-20 ವಿಶ್ವಕಪ್​ನ ಗುಂಪುಹಂತದ ನಿರ್ಣಾಯಕ ಪಂದ್ಯದಲ್ಲಿ ಓಮನ್ ವಿರುದ್ಧ ಸೆಣಸಲಿರುವ ಬಾಂಗ್ಲಾದೇಶ
  • ಬಿಜೆಪಿ ಮತ್ತು ಆರ್​ಎಸ್​ಎಸ್​ ನಡುವಿನ ಎರಡು ದಿನದ ಸಹಕಾರ ಸಭೆ ನವದೆಹಲಿಯಲ್ಲಿ ಆರಂಭ
  • ಉತ್ತರ ಪ್ರದೇಶದ ಲಖನೌಗೆ ಭೇಟಿ ನೀಡಲಿರುವ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.