ಹೃದಯವಿದ್ರಾವಕ ಘಟನೆ: ಕೊಲೆಯಾದ ಮಗಳು, ಆತ್ಮಹತ್ಯೆ ಮಾಡಿಕೊಂಡ ತಂದೆ, ತಾಯಿಗೆ ಕ್ಯಾನ್ಸರ್​​

author img

By

Published : Oct 14, 2022, 5:52 PM IST

ಕೊಲೆಯಾದ ಮಗಳು,

ಪ್ರೀತಿಸಲಿಲ್ಲ ಎಂಬ ಕಾರಣಕ್ಕೆ ಪ್ರೇಮಿಯೊಬ್ಬ ಯುವತಿಯನ್ನು ರೈಲಿನಡಿ ತಳ್ಳಿ ಕೊಲೆ ಮಾಡಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ಮಗಳ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ತಂದೆ ಆತ್ಮಹತ್ಯೆ ಮಾಡಿಕೊಂಡಿದ್ದು, ಯುವತಿ ತಾಯಿ ಕ್ಯಾನ್ಸರ್​ನಿಂದ ಬಳಲುತ್ತಿದ್ದಾರೆ.

ಚೆನ್ನೈ: ಪ್ರೀತಿಯನ್ನು ತಿರಸ್ಕರಿಸಿದ್ದಕ್ಕೆ ಯುವಕನೊಬ್ಬ ಯುವತಿಯನ್ನು ರೈಲಿನಡಿ ತಳ್ಳಿ ಕೊಲೆ ಮಾಡಿರುವ ಘಟನೆ ಚೆನ್ನೈನ ಪರಂಗಿಮಲೈ ರೈಲು ನಿಲ್ದಾಣದಲ್ಲಿ ನಡೆದಿದೆ. ಚಲಿಸುತ್ತಿದ್ದ ಸಬ್ ಅರ್ಬನ್ ರೈಲಿನ ಮುಂದೆ ಕಾಲೇಜು ವಿದ್ಯಾರ್ಥಿನಿ ಸತ್ಯಾ ಎಂಬಾಕೆಯನ್ನು ಯುವಕನೊಬ್ಬ ತಳ್ಳಿ, ಹತ್ಯೆ ಮಾಡಿದ್ದಾನೆ. ಈ ನಿಟ್ಟಿನಲ್ಲಿ 7 ವಿಶೇಷ ಪಡೆಗಳನ್ನು ರಚಿಸಿ, ಹತ್ಯೆಗೈದ ಸತೀಶ್​ ಎಂಬ ವ್ಯಕ್ತಿಯನ್ನು ಚೆನ್ನೈನ ಪೂರ್ವ ಕರಾವಳಿ ರಸ್ತೆಯಲ್ಲಿ ಬಂಧಿಸಲಾಗಿದೆ.

ತಮಿಳುನಾಡಿನಲ್ಲೊಂದು ಹೃದಯವಿದ್ರಾವಕ ಘಟನೆ

ಈ ನಡುವೆ ಮಗಳ ಸಾವಿನ ವಿಷಯ ತಿಳಿದ ಸತ್ಯಾ ತಂದೆ ಮಾಣಿಕ್ಕಂ ವಿಷ ಕುಡಿದು ಅತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತ ವಿದ್ಯಾರ್ಥಿನಿಯ ತಾಯಿ, ಮಹಿಳಾ ಹೆಡ್ ಕಾನ್​ಸ್ಟೇಬಲ್​​ ರಾಮಲಕ್ಷ್ಮಿ ಕ್ಯಾನ್ಸರ್​ನಿಂದ ಬಳಲುತ್ತಿದ್ದಾರೆ.

ಕೊಲೆಯಾದ ಸತ್ಯಾ
ಕೊಲೆಯಾದ ಸತ್ಯಾ

ಚೆನ್ನೈ ಪೊಲೀಸ್ ಕಮಿಷನರ್ ಶಂಕರ್ ಜಿವಾಲ್ ಅವರು ಕಾಲೇಜು ವಿದ್ಯಾರ್ಥಿನಿ ಸತ್ಯಾ ಅವರ ಮನೆಗೆ ಖುದ್ದಾಗಿ ಭೇಟಿ ನೀಡಿ, ಅನಾರೋಗ್ಯ ಪೀಡಿತ ತಾಯಿ ರಾಮಲಕ್ಷ್ಮಿ ಅವರಿಗೆ ಸಾಂತ್ವನ ಹೇಳಿದ್ದಾರೆ. ತಾಂಬರಂ ರೈಲ್ವೆ ಪೊಲೀಸ್ ಇಲಾಖೆ ಅಧಿಕಾರಿಗಳು ಸತೀಶ್​ ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಪ್ರೀತಿ ನಿರಾಕರಿಸಿದ್ದಕ್ಕೆ ಯುವತಿ ಬಲಿ.. ಕಾನ್ಸ್​ಟೇಬಲ್ ಮಗಳನ್ನು ರೈಲಿಗೆ ತಳ್ಳಿ ಕೊಂದ ಪಾಪಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.