ಕಾಂಗ್ರೆಸ್‌ಗೆ ವರುಣ ಗಾಂಧಿ ಅವರನ್ನ ಸ್ವಾಗತಿಸಿದ್ದ ಇಬ್ಬರು ಕೈ ನಾಯಕರಿಗೆ ಶೋಕಾಸ್ ನೋಟಿಸ್..

author img

By

Published : Oct 13, 2021, 6:12 PM IST

Cong issues notice to 2 leaders for Sonia-Varun posters

ವರುಣ್ ಗಾಂಧಿ ಕಾಂಗ್ರೆಸ್ ಸೇರಿಕೊಂಡು ಮುಖ್ಯಮಂತ್ರಿ ಅಭ್ಯರ್ಥಿಯಾದರೆ ಅದ್ಭುತವಾಗಿರುತ್ತದೆ. ಕೆಲವೇ ದಿನಗಳಲ್ಲಿ ಕಾಂಗ್ರೆಸ್‌ಗೆ​ ಪುನರ್​ಜೀವ ಬರುತ್ತದೆ ಎಂದು ಕಾಂಗ್ರೆಸ್​ ನಾಯಕರೊಬ್ಬರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ..

ಲಖನೌ : ಬಿಜೆಪಿ ನಾಯಕ ವರುಣ್ ಗಾಂಧಿಯನ್ನು ಸ್ವಾಗತಿಸಿ ಪ್ರಯಾಗರಾಜ್​​ನಲ್ಲಿ ಪೋಸ್ಟರ್ ಅಂಟಿಸಿದ್ದ ಇಬ್ಬರು ಕಾಂಗ್ರೆಸ್ ನಾಯಕರಿಗೆ ಶೋಕಾಸ್ ನೋಟಿಸ್ ನೀಡಲಾಗಿದೆ.

ಪೋಸ್ಟರ್‌ಗಳಲ್ಲಿ ಬಿಜೆಪಿ ಸಂಸದ ವರುಣ್ ಗಾಂಧಿ ಮತ್ತು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿಯ ಭಾವಚಿತ್ರಗಳಿವೆ. ಅಲ್ಲದೇ ಅದರಲ್ಲಿ ''ದುಃಖದ ದಿನಗಳು ಕೊನೆಗೊಳ್ಳುತ್ತವೆ, ಒಳ್ಳೆಯ ದಿನಗಳು ಬರಲಿವೆ'' ಎಂಬ ಘೋಷಣೆಗಳಿವೆ.

ಇಬ್ಬರು ಕಾಂಗ್ರೆಸ್​ ನಾಯಕರಾದ ಇರ್ಷಾದುಲ್ಲಾ ಮತ್ತು ಬಾಬಾ ಅಭಯ್ ಅವಸ್ಥಿ ಅವರ ಈ ನಡವಳಿಕೆಯನ್ನು ವಿವರಿಸಲು ಅಥವಾ ಮುಂದಿನ ಕ್ರಮವನ್ನು ಎದುರಿಸಲು ಕೇಳಲಾಗಿದೆ.

welcome poster
ವರುಣ್ ಗಾಂಧಿಯನ್ನು ಸ್ವಾಗತಿಸಿ ಪ್ರಯಾಗರಾಜ್​​ನಲ್ಲಿ ಹಾಕಿದ್ದ ಪೋಸ್ಟರ್

ರೈತರ ಮೇಲಿನ ಹಿಂಸಾಚಾರದ ಬಗ್ಗೆ ಮತ್ತು ರೈತರನ್ನು ಬೆಂಬಲಿಸಲು ಸರಣಿ ಟ್ವೀಟ್‌ಗಳನ್ನು ಪೋಸ್ಟ್ ಮಾಡಿದ ನಂತರ ಕಾಂಗ್ರೆಸ್ಸಿಗರು ವರುಣ್ ಗಾಂಧಿಯನ್ನು ತಮ್ಮತ್ತ ಸೆಳೆಯಲು ಉತ್ಸುಕರಾಗಿದ್ದಾರೆ.

ವರುಣ್ ಗಾಂಧಿ ಕಾಂಗ್ರೆಸ್ ಸೇರಿಕೊಂಡು ಮುಖ್ಯಮಂತ್ರಿ ಅಭ್ಯರ್ಥಿಯಾದರೆ ಅದ್ಭುತವಾಗಿರುತ್ತದೆ. ಕೆಲವೇ ದಿನಗಳಲ್ಲಿ ಕಾಂಗ್ರೆಸ್‌ಗೆ​ ಪುನರ್​ಜೀವ ಬರುತ್ತದೆ ಎಂದು ಕಾಂಗ್ರೆಸ್​ ನಾಯಕರೊಬ್ಬರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಬಿಜೆಪಿ ಸಾವರ್ಕರ್ ಅವರನ್ನೇ ರಾಷ್ಟ್ರಪಿತ ಎಂದು ಘೋಷಣೆ ಮಾಡಬಹುದು ; ಓವೈಸಿ ವ್ಯಂಗ್ಯ

ಆದ್ರೆ, ವರುಣ್ ಗಾಂಧಿ ಅವರು ಕಾಂಗ್ರೆಸ್ ಸೇರುವ ವದಂತಿಗಳನ್ನು ತಳ್ಳಿ ಹಾಕಿದ್ದಾರೆ. ಮನೇಕಾ ಗಾಂಧಿ ಮತ್ತು ವರುಣ್ ಗಾಂಧಿ ಇಬ್ಬರನ್ನು ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಸೇರಿಸಲಾಗಿಲ್ಲ. ಇದು ಪಕ್ಷದಲ್ಲಿ ಊಹಾಪೋಹಗಳಿಗೆ ಕಾರಣವಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.