ಹಾವು ಕಚ್ಚಿ ಮೃತಪಟ್ಟ ಬಾಲಕ.. ಮಾಂತ್ರಿಕನ ಮಾತು ಕೇಳಿ ಹೂತಿದ್ದ ಶವ ತೆಗೆದ ಜನರು

author img

By

Published : Aug 4, 2022, 10:10 AM IST

boy-death-by-snake-bite

ಹಾವು ಕಚ್ಚಿ ಮೃತಪಟ್ಟ ಬಾಲಕನ ಹೂತಿದ್ದ ಶವವನ್ನು, ಹಾವಿನ ವಿಷ ತೆಗೆಯುವ ವ್ಯಕ್ತಿಯ ಮಾತು ಕೇಳಿ ಹೊರತೆಗೆಯಲಾಗಿದೆ. ಬಳಿಕ ಬದುಕಿಸಲು ಅಸಾಧ್ಯ ಎಂದು ತಿಳಿದು ಮತ್ತೆ ಹೂಳಿದ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.

ಅಲಿಗಢ: ಇಂದಿನ ವಿಜ್ಞಾನ ಕಾಲದಲ್ಲೂ ಮೂಢನಂಬಿಕೆಗಳನ್ನು ಜನರು ನಂಬುತ್ತಾರೆ. ಇದರ ನೆರಳು ನಮ್ಮಿಂದ ಇನ್ನೂ ದೂರವಾಗಿಲ್ಲ. ಉತ್ತರ ಪ್ರದೇಶದ ಅಲಿಗಢದಲ್ಲಿ ಬಾಲಕನೊಬ್ಬ ಹಾವು ಕಚ್ಚಿ ಮೃತಪಟ್ಟಿದ್ದು, ಶವ ಸಂಸ್ಕಾರ ಮಾಡಲಾಗಿತ್ತು. ಬಳಿಕ ಮಾಂತ್ರಿಕನ ಮಾತು ಕೇಳಿ ಹೂತಿದ್ದ ಶವವನ್ನು ಹೊರತೆಗೆದು ಬದುಕಿಸುವ ವಿಫಲ ಯತ್ನ ನಡೆದಿದೆ.

ಹಾವು ಕಚ್ಚಿ ಮೃತಪಟ್ಟ ಬಾಲಕ.

ಅಲಿಗಢ್‌ನ ತಹಸಿಲ್ ಖೈರ್ ಪ್ರದೇಶದ ಶಿವಲಾ ಖುರ್ದ್ ಗ್ರಾಮದಲ್ಲಿ ಇದೇ ರೀತಿಯ ಪ್ರಕರಣ ಬೆಳಕಿಗೆ ಬಂದಿದೆ. ವಿಷಪೂರಿತ ನಾಗರಹಾವು ಬಾಲಕನನ್ನು ಕಚ್ಚಿದ್ದು, ಇದರಿಂದಾಗಿ ಆತ ಮೃತಪಟ್ಟಿದ್ದ. ಬಳಿಕ ಬಾಲಕನ ಶವವನ್ನು ಅಂತ್ಯಸಂಸ್ಕಾರ ಮಾಡಲಾಗಿದೆ.

ಈ ವಿಷಯ ತಿಳಿದ ಹಾವುಗಳ ವಿಷವನ್ನು ಹೊರತೆಗೆಯುವ ಬಯ್ಯಗೀರ್​ ಎಂಬಾತ ಕುಟುಂಬಸ್ಥರ ಜೊತೆ ಮಾತುಕತೆ ನಡೆಸಿ, ಬಾಲಕನನ್ನು ಬದುಕಿಸುವೆ ಎಂದು ನಂಬಿಸಿದ್ದಾನೆ. ಇದನ್ನು ನಂಬಿದ ಜನರು ಬಾಲಕನನ್ನು ಹೂತಿದ್ದ ಸಮಾಧಿಯಿಂದ ಹೊರ ತೆಗೆದಿದ್ದಾರೆ.

ಬಳಿಕ ಆ ಮಾಂತ್ರಿಕ ತನ್ನಲ್ಲಿನ ಮಂತ್ರವಿದ್ಯೆಯನ್ನು ಬಾಲಕನ ಮೇಲೆ ಪ್ರಯೋಗಿಸಿದ್ದಾನೆ. ಬೇವಿನ ಸೊಪ್ಪಿನಿಂದ ಬಾಲಕನ ನಿವಾಳಿಸಿದಂತೆ ಮಾಡಿ, ಬದುಕಿಸುವ ಸೋಗು ಹಾಕಿದ್ದಾನೆ. ಕೆಲ ಸಮಯದ ನಂತರ ಬಾಲಕನನ್ನು ಬದುಕಿಸಲು ಅಸಾಧ್ಯ ಎಂದು ಹೇಳಿ ಮತ್ತೆ ಸಮಾಧಿ ಮಾಡಿಸಿದ್ದಾನೆ.

ಮಾಂತ್ರಿಕನ ಮಾತು ಕೇಳಿ ಊರಿನ ಜನರೆಲ್ಲರೂ ಒಂದೆಡೆ ಸೇರಿ ಕುತೂಹಲದಿಂದ ನೋಡುತ್ತಿದ್ದರು. ಮಾಂತ್ರಿಕನ ಮರಳು ಮಾತು ಕೇಳಿ ಕುಟುಂಬಸ್ಥರು ಹೂತಿದ್ದ ಶವವನ್ನು ತೆಗೆದು ಮರಳಿ ಹೂತಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಓದಿ: ರಾಮ್ಸನ್ ಪಟ್ಟಿಗೆ ಕರ್ನಾಟಕದ ರಂಗನತಿಟ್ಟು.. ದೇಶದಲ್ಲೀಗ 64 ತಾಣಗಳಿಗೆ ಅಂತಾರಾಷ್ಟ್ರೀಯ ಮನ್ನಣೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.