ಗೋಧ್ರಾ ಹತ್ಯಾಕಾಂಡದಲ್ಲಿ ಮೋದಿ ಪಾತ್ರವಿದೆ ಎಂದಿದ್ದ ಐಪಿಎಸ್​ ಅಧಿಕಾರಿಗೆ ಜೀವಾವಧಿ ಶಿಕ್ಷೆ!

author img

By

Published : Jun 20, 2019, 2:10 PM IST

Updated : Jun 20, 2019, 4:25 PM IST

ನಿವೃತ್ತ ಐಪಿಎಸ್​ ಅಧಿಕಾರಿ ಸಂಜೀವ್ ಭಟ್​ ಗುಜರಾತ್​ನ ಜಾಮ್​ನಗರದ ಹೆಚ್ಚುವರಿ ಪೊಲೀಸ್​ ವರಿಷ್ಠಾಧಿಕಾರಿಯಾಗಿದ್ದ ವೇಳೆ, ಕೋಮು ಗಲಭೆ ಸಂಬಂಧ 100 ಮಂದಿಯನ್ನು ವಶಕ್ಕೆ ಪಡೆದಿದ್ದರು. ಇದರಲ್ಲಿ ಓರ್ವ ಆರೋಪಿ ಬಿಡುಗಡೆಯಾದ ಬಳಿಕ, ಆಸ್ಪತ್ರೆಯಲ್ಲಿ ಮೃತಪಟ್ಟಿದ್ದ. ಈ ಪ್ರಕರಣದಲ್ಲಿ ಅವರಿಗೆ ಜಾಮ್​ನಗರ್​ ಸೆಷನ್ಸ್​ ಕೋರ್ಟ್​ ಜೀವಾವಧಿ ಶಿಕ್ಷೆ ಪ್ರಕಟಿಸಿದೆ.

ಗಾಂಧಿನಗರ: ಕಸ್ಟಡಿಯಲ್ಲಿದ್ದ ಆರೋಪಿಯ ಸಾವಿನ ಪ್ರಕರಣದಲ್ಲಿ ನಿವೃತ್ತ ಐಪಿಎಸ್​ ಅಧಿಕಾರಿ ಸಂಜೀವ್ ಭಟ್​ ಅವರಿಗೆ ಜಾಮ್​ನಗರ್​ ಸೆಷನ್ಸ್​ ಕೋರ್ಟ್​ ಜೀವಾವಧಿ ಶಿಕ್ಷೆ ಪ್ರಕಟಿಸಿದೆ.

ಕಳೆದ ವಾರವಷ್ಟೇ ಭಟ್​, ಪ್ರಕರಣ ಸಂಬಂಧ 11 ಹೆಚ್ಚುವರಿ ಸಾಕ್ಷಿಗಳನ್ನು ಪರೀಕ್ಷೆಗೊಳಪಡಿಸಬೇಕು ಎಂದು ಸುಪ್ರೀಂಕೋರ್ಟ್​ಗೆ ಮನವಿ ಸಲ್ಲಿಸಿದ್ದರು. ಈಗಾಗಲೆ ತ್ರಿಸದಸ್ಯರ ಪೀಠ ಈ ಮನವಿ ತಿರಸ್ಕರಿಸಿದೆ. ಹಾಗಾಗಿ ಭಟ್​ ಮನವಿಯನ್ನು ಪುರಸ್ಕರಿಸಲಾಗಿಲ್ಲ ಎಂದು ನ್ಯಾ. ಇಂದಿರಾ ಬ್ಯಾನರ್ಜಿ ಹಾಗೂ ಅಜಯ್​ ರಸ್ತೋಗಿ ಅವರ ಪೀಠ ಹೇಳಿತ್ತು.

ಇಂದು ಜಾಮ್​ನಗರ ಸೆಷನ್ಸ್​ ಕೋರ್ಟ್​ ಜೀವಾವಧಿ ಶಿಕ್ಷೆ ಪ್ರಕಟಿಸಿ, ಆದೇಶ ನೀಡಿದೆ.

ಭಟ್​ ಗುಜರಾತ್​ನ ಜಾಮ್​ನಗರದ ಹೆಚ್ಚುವರಿ ಪೊಲೀಸ್​ ವರಿಷ್ಠಾಧಿಕಾರಿಯಾಗಿದ್ದ ವೇಳೆ, ಕೋಮು ಗಲಭೆ ಸಂಬಂಧ 100 ಮಂದಿಯನ್ನು ವಶಕ್ಕೆ ಪಡೆದಿದ್ದರು. ಇದರಲ್ಲಿ ಓರ್ವ ಆರೋಪಿ ಬಿಡುಗಡೆಯಾದ ಬಳಿಕ, ಆಸ್ಪತ್ರೆಯಲ್ಲಿ ಮೃತಪಟ್ಟಿದ್ದ.

2011ರಲ್ಲಿ ಮೇಲಧಿಕಾರಿಗಳ ಅನುಮತಿ ಪಡೆಯದೇ ರಜೆ ತೆಗೆದುಕೊಂಡಿದ್ದಲ್ಲದೆ, ಸರ್ಕಾರಿ ವಾಹನವನ್ನ ದುರ್ಬಳಕೆ ಮಾಡಿಕೊಂಡಿದ್ದರಿಂದ ಭಟ್​ ಅವರನ್ನು ಅಮಾನತು ಮಾಡಲಾಗಿತ್ತು. 2015ರಲ್ಲಿ ಕಸ್ಟಡಿಯಲ್ಲಿದ್ದ ಆರೋಪಿ ಸಾವಿನ ಪ್ರಕರಣದಲ್ಲಿ ಇವರನ್ನು ಬಂಧಿಸಲಾಗಿತ್ತು.

2002ರ ಗೋದ್ರಾ ಹತ್ಯಾಕಾಂಡದಲ್ಲಿ ಅಂದಿನ ಸಿಎಂ ಆಗಿದ್ದ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್​ ಶಾ ಪಾತ್ರವಿದೆ ಎಂದು ಭಟ್​ 2011ರಲ್ಲಿ ಸುಪ್ರೀಂಕೋರ್ಟ್​ಗೆ ಅಫಿಡವಿಟ್​ ಸಲ್ಲಿಸಿದ್ದರು.

Intro:Body:Conclusion:
Last Updated :Jun 20, 2019, 4:25 PM IST

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.