ETV Bharat / sports

ಚೆನ್ನೈ ಸೂಪರ್‌ಕಿಂಗ್ಸ್‌ಗೆ ಆಘಾತ! ಶ್ರೀಲಂಕಾಗೆ ತೆರಳಿದ ವೇಗದ ಬೌಲರ್‌ ಮಥೀಶ​​ ​ಪತಿರಾನ - Pathirana

author img

By ANI

Published : May 6, 2024, 10:08 AM IST

ಮಥೀಶ ಪತಿರಾನ
ಮಥೀಶ ಪತಿರಾನ (ETV Bharat)

ಮಂಡಿರಜ್ಜು ಗಾಯದಿಂದ ಬಳಲುತ್ತಿರುವ ವೇಗದ ಬೌಲರ್ ಮಥೀಶ ಪತಿರಾನ ಐಪಿಎಲ್​ ತೊರೆದು ಶ್ರೀಲಂಕಾಗೆ ವಾಪಸ್​ ಆಗಿದ್ದಾರೆ.

ಧರ್ಮಶಾಲಾ(ಹಿಮಾಚಲ ಪ್ರದೇಶ): ಮಂಡಿರಜ್ಜು ಗಾಯದಿಂದಾಗಿ ಕಳೆದೆರಡು ಪಂದ್ಯಗಳಿಂದ ಹೊರಗುಳಿದಿದ್ದ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ವೇಗಿ ಮಥೀಶ ಪತಿರಾನ ಶ್ರೀಲಂಕಾಕ್ಕೆ ತೆರಳಿದ್ದಾರೆ.

ಭಾನುವಾರ ಧರ್ಮಶಾಲಾದಲ್ಲಿ ನಡೆದ ಪಂಜಾಬ್ ಕಿಂಗ್ಸ್ (ಪಿಬಿಕೆಎಸ್) ವಿರುದ್ಧದ ಪಂದ್ಯದಿಂದ ಹೊರಗುಳಿದಿದ್ದ ಪತಿರಾನ, ನಿನ್ನೆಯ ಪಂದ್ಯದಲ್ಲೂ ಆಡಿರಲಿಲ್ಲ. ಇದೀಗ ತವರಿಗೆ ತೆರಳಿದ್ದಾರೆ. ಈ ಬಗ್ಗೆ ಫ್ರಾಂಚೈಸಿ ಮಾಹಿತಿ ನೀಡಿದ್ದು, 'ಪತಿರಾನ ಮಂಡಿರಜ್ಜು ಗಾಯದಿಂದ ಬಳಲುತ್ತಿದ್ದಾರೆ. ಸೂಕ್ತ ಚಿಕಿತ್ಸೆ ಪಡೆದು ಚೇತರಿಸಿಕೊಳ್ಳಲು ಶ್ರೀಲಂಕಾಕ್ಕೆ ಮರಳಲಿದ್ದಾರೆ. ಶೀಘ್ರ ಅವರು ಗುಣಮುಖರಾಗಲಿ' ಎಂದು ಹಾರೈಸಿದೆ.

ಬಲಗೈ ವೇಗಿ ಪತಿರಾನಾ ಈ ಋತುವಿನಲ್ಲಿ ಚೆನ್ನೈ ಪರ 6 ​​ಪಂದ್ಯಗಳನ್ನು ಆಡಿದ್ದು 7.68ರ ಎಕಾನಮಿಯೊಂದಿಗೆ 13 ವಿಕೆಟ್​ಗಳನ್ನು ಪಡೆದಿದ್ದಾರೆ. ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ್ದು, 4 ಓವರ್‌ಗಳಲ್ಲಿ 28 ರನ್ ನೀಡಿ 4 ವಿಕೆಟ್ ಪಡೆದಿದ್ದರು. ಮುಂಬರುವ ಟಿ20 ವಿಶ್ವಕಪ್ ಗಮನದಲ್ಲಿಟ್ಟುಕೊಂಡು, ಶೀಘ್ರವೇ ಗುಣಮುಖರಾಗಲು ಸ್ವದೇಶಕ್ಕೆ ಹಿಂತಿರುಗಿದ್ದಾರೆ.

ಮುಸ್ತಫಿಜುರ್ ಕೂಡ ವಾಪಸ್​: ಐಪಿಎಲ್ ಅಂತಿಮ ಘಟ್ಟ ತಲುಪುತ್ತಿರುವಾಗಲೇ ಸಿಸಿಎಸ್​ಕೆ ಪ್ರಮುಖ ಬೌಲರ್​ಗಳು ತಮ್ಮ ದೇಶಕ್ಕೆ ಹಿಂತಿರುಗಿದ್ದಾರೆ. ಮಥೀಶ ಪತಿರಾನಾ ಗಾಯದ ಸಮಸ್ಯೆಯಿಂದ ತಂಡ ತೊರೆದರೆ, ಇದಕ್ಕೂ ಮೊದಲು ಮುಸ್ತಾಫಿಜುರ್ ರೆಹಮಾನ್ ಬಾಂಗ್ಲಾದೇಶ ಮತ್ತು ಜಿಂಬಾಬ್ವೆ ನಡುವಿನ 5 ಪಂದ್ಯಗಳ ಟಿ20 ಸರಣಿಗಾಗಿ ತಮ್ಮ ದೇಶಕ್ಕೆ ಹಿಂತಿರುಗಿದ್ದಾರೆ.

ಇದನ್ನೂ ಓದಿ: ಡೋಪಿಂಗ್​ ಟೆಸ್ಟ್​ಗೆ ಒಳಗಾಗದ ಬಜರಂಗ್​ ಪೂನಿಯಾ ಅಮಾನತು: ನಾಡಾ ವಿರುದ್ಧ ಪೈಲ್ವಾನ್​ ಗರಂ - wrestler Bajrang Punia

ETV Bharat Logo

Copyright © 2024 Ushodaya Enterprises Pvt. Ltd., All Rights Reserved.